ಪತಿ ಫಿಲಂಸ್ ಲಾಂಛನದಡಿಯಲ್ಲಿ ಶ್ರೀ ಪಾರ್ಥಸಾರಥಿ, ಗೌತಂ ಸೇಠ್ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ಸಿಂಹ ಹಾಕಿದ ಹೆಜ್ಜೆ ಎಂದು ಹೆಸರಿಡಲಾಗಿದೆ.
ಚಿತ್ರಕ್ಕೆ ಇತ್ತೀಚೆಗೆ ರಾಜ್ ರಾಮನಾಥನ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಕ್ತಾಯ ಗೊಂಡಿತು.
ಪಕ್ಕಾ ವಿಷ್ಣುವರ್ಧನ್ ಅಭಿಮಾನಿಯಾದ ಈ ಚಿತ್ರದ ನಿರ್ಮಾಪಕ ಪಾರ್ಥಸಾರಥಿ ಚಿತ್ರವನ್ನು ವಿಷ್ಣುವರ್ಧನ್ಗೆ ಸಮರ್ಪಿಸುತ್ತಿದ್ದೇವೆ ಎಂದಿದ್ದಾರೆ.
ಚಿತ್ರಕ್ಕೆ ಪಾರ್ಥಸಾರಥಿ ಕಥೆ, ರವಿಶಂಕರ್ನಾಗ್ ಸಂಭಾಷಣೆ, ಶಿವಕುಮಾರ್ ಛಾಯಾಗ್ರಹಣ, ಹರಿಬಾಬು ಸಂಗೀತ, ಮಂಜು ಮೋಹನ್ ಸಾಹಿತ್ಯ, ರಾಜು ನೃತ್ಯ, ವಿಶ್ವ ಸಂಕಲನ, ಬಾಬುಖಾನ್ ಕಲೆ, ವೇಣುಗೋಪಾಲ್ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರಕಥೆ, ಸಾಹಸ ಮತ್ತು ನಿರ್ದೇಶನ ವಿಕ್ರಂ.
ತಾರಾಗಣದಲ್ಲಿ ಪ್ರೀತಂ, ಅಮೃತ, ಶರತ್ ಲೋಹಿತಾಶ್ವ, ಶೋಭರಾಜ್, ಪವನ್, ತಬಲ ನಾಣಿ, ಸಂಗೀತ, ಸೋನು ಮುಂತಾದವರಿದ್ದಾರೆ.